ಪಾದಗಳ ಊತವನ್ನು ಲಘುವಾಗಿ ತಗೋಬೇಡಿ; ಇದು ಹೃದಯ ವೈಫಲ್ಯದ ಮೂಕ ಸಂಕೇತವಾಗಿರಬಹುದು!

ದಿನವಿಡೀ ಓಡಾಡುವ ನಮಗೆ ಸಂಜೆಯಾಗುವಾಗ ಪಾದಗಳು ಅಥವಾ ಹಿಮ್ಮಡಿಯ ಮೇಲ್ಭಾಗ (Ankles) ಕೊಂಚ ಬಾತುಕೊಂಡಂತೆ (ಊತ) ಅನಿಸುವುದು ಸಾಮಾನ್ಯ. ಸುದೀರ್ಘ ಪ್ರಯಾಣ ಮಾಡಿದಾಗ, ಹೆಚ್ಚು ಹೊತ್ತು ಒಂದೇ ಕಡೆ ಕುಳಿತಾಗ ಅಥವಾ ನಿಂತಾಗ ಹೀಗಾಗುವುದು ಸಹಜ ಎಂದು ನಾವು ಭಾವಿಸುತ್ತೇವೆ. ಆದರೆ, ವೈದ್ಯಕೀಯ ಸಂಶೋಧನೆಗಳ ಪ್ರಕಾರ, ಪಾದದ ಕೀಲುಗಳಲ್ಲಿ ಕಾಣಿಸಿಕೊಳ್ಳುವ ನಿರಂತರ ಊತ ಅಥವಾ ಬದಲಾವಣೆಗಳು ಕೇವಲ ದಣಿವನ್ನು ಸೂಚಿಸುವುದಿಲ್ಲ. ಬದಲಿಗೆ, ಅವು ದೇಹದ ಒಳಗಿರುವ ಎರಡು ಮಾರಣಾಂತಿಕ ಮತ್ತು ಪ್ರಾಣಾಪಾಯ ತರಬಲ್ಲ ಕಾಯಿಲೆಗಳ ಪ್ರಮುಖ ಮುನ್ಸೂಚನೆಗಳಾಗಿರಬಹುದು! […]

ಶಾಂತಿ-ಸೌಹಾರ್ದತೆಯಿಂದ ಬಕ್ರೀದ್ ಹಬ್ಬ ಆಚರಿಸೋಣ : ಶಿವಮೊಗ್ಗ ಡಿಸಿ ಪ್ರಭುಲಿಂಗ ಕವಳಿಕಟ್ಟಿ

ಶಿವಮೊಗ್ಗ: ಮುಂಬರುವ ಬಕ್ರೀದ್ ಹಬ್ಬವನ್ನು ಜಿಲ್ಲೆಯಾದ್ಯಂತ ಅತ್ಯಂತ ಶಾಂತಿ, ಸೌಹಾರ್ದತೆ ಮತ್ತು ಧಾರ್ಮಿಕ ಶ್ರದ್ಧಾಭಕ್ತಿಗಳಿಂದ ಆಚರಿಸೋಣವೆಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು. ಶನಿವಾರ ನಗರದ ಡಿಎಆರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಬಕ್ರೀದ್ ಹಬ್ಬ ಕುಎಇತಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ಸೌಹಾರ್ದಯುತವಾಗಿ ರಾಜ್ಯಕ್ಕೇ ಮಾದರಿಯಾಗಿ ಹಬ್ಬವನ್ನು ಆಚರಿಸೋಣ.ಹಬ್ಬದ ವೇಳೆ ಸ್ವಚ್ಚತೆ ಕಾಪಾಡುವುದು ಮತ್ತು ಸುರಕ್ಷತೆ ಕುರಿತು ಈಗಾಗಲೇ ಎರಡು ಬಾರಿ ಸಭೆಯನ್ನು ಮಾಡಿ ಸಮಾಲೋಚನೆ ನಡೆಸಿ, ಅದೇ ರೀತಿ […]

ಬೂದಿ ಮುಚ್ಚಿದ ಕೆಂಡವಾದ ಕರ್ನಾಟಕ ಯುವ ಕಾಂಗ್ರೆಸ್: ಪರಸ್ಪರ ಕತ್ತಿ ಮಸಿಯುತ್ತಿರುವ ಮಂಜುನಾಥ್ ಮತ್ತು ದೀಪಿಕಾ ರೆಡ್ಡಿ ಬಣಗಳು!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಭದ್ರ ಬುನಾದಿಯಂತಿರುವ ಯೂಥ್ ಕಾಂಗ್ರೆಸ್ (ಯುವ ಕಾಂಗ್ರೆಸ್) ಒಳಗೆ ಈಗ ತೀವ್ರ ರಾಜಕೀಯ ಬಿರುಗಾಳಿ ಎದ್ದಿದೆ. ಸದಾ ಸಕ್ರಿಯವಾಗಿ ಕರಪತ್ರ, ಪ್ರತಿಭಟನೆ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಿದ್ದ ಸಂಘಟನೆ ಈಗ ಸಂಪೂರ್ಣವಾಗಿ ಒಡೆದ ಮನೆಯಾಗಿದೆ. ಆಂತರಿಕ ಭಿನ್ನಮತ, ತಾರಕಕ್ಕೇರಿರುವ ಬಣ ರಾಜಕೀಯ ಮತ್ತು ನಾಯಕರ ನಡುವಿನ ಹಠಮಾರಿ ಧೋರಣೆಯಿಂದಾಗಿ ರಾಜ್ಯ ಯೂಥ್ ಕಾಂಗ್ರೆಸ್ ಎರಡು ಹೋಳಾಗಿ ಪ್ರದರ್ಶನಗೊಳ್ಳುತ್ತಿದೆ. ಸಂಘಟನೆಯ ಇತಿಹಾಸದಲ್ಲೇ ಕಾಣದಂತಹ ಶೀತಲ ಸಮರ ಮತ್ತು ಬಹಿರಂಗ ಜಟಾಪಟಿಗಳು ಈಗ […]

ಕತ್ತಿನ ಸುತ್ತ ಕಪ್ಪು ವರ್ತುಲವಿದೆಯೇ? ಇದನ್ನು ಕೇವಲ ‘ಟ್ಯಾನ್’ ಅಂದುಕೊಂಡರೆ ಅಪಾಯ ಗ್ಯಾರಂಟಿ!

ಅನೇಕ ಬಾರಿ ಜನರು ತಮ್ಮ ಕತ್ತಿನ ಸುತ್ತ ಕಪ್ಪಾಗುವುದನ್ನು ಕೇವಲ ಧೂಳು, ಕೊಳೆ ಅಥವಾ ಬಿಸಿಲಿನಿಂದ ಆದ ಟ್ಯಾನ್ (sun tan) ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ. ಇದನ್ನು ಕೇವಲ ಸೌಂದರ್ಯದ ಸಮಸ್ಯೆಯೆಂದು ತಿಳಿದು, ವಿವಿಧ ಕ್ರೀಮ್‌ಗಳು ಅಥವಾ ಮನೆಮದ್ದುಗಳ ಮೂಲಕ ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ, ವೈದ್ಯಕೀಯ ಜಗತ್ತಿನ ಪ್ರಕಾರ, ಕತ್ತಿನ ಸುತ್ತ ಮೂಡುವ ಈ ದಟ್ಟವಾದ ಕಪ್ಪು ವರ್ತುಲವು ಕೇವಲ ಚರ್ಮದ ಸಮಸ್ಯೆಯಲ್ಲ; ಇದು ನಿಮ್ಮ ದೇಹದ ಒಳಗಿನ ಗಂಭೀರ ಆರೋಗ್ಯ ಏರುಪೇರುಗಳನ್ನು ಸೂಚಿಸುವ ಒಂದು ಪ್ರಮುಖ […]

ಜೂನ್ 1ರಿಂದ ಶಾಲಾ ಪ್ರಾರಂಭೋತ್ಸವ: ಸಿಎಂ ಸಿದ್ದರಾಮಯ್ಯ ಚಾಲನೆ!

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹೊಸ ಶೈಕ್ಷಣಿಕ ವರ್ಷವನ್ನು ಹಬ್ಬದಂತೆ ಆಚರಿಸಲು ಶಿಕ್ಷಣ ಇಲಾಖೆ ಸಂಪೂರ್ಣವಾಗಿ ಸಜ್ಜಾಗಿದೆ. ಮುಂಬರುವ ಜೂನ್ 1ರಂದು ರಾಜ್ಯಾದ್ಯಂತ ಶಾಲಾ ಪ್ರಾರಂಭೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಲಿದ್ದು, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಶಾಲೆಗೆ ಸ್ವಾಗತಿಸುವ ಮೂಲಕ ಈ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ಹೊಸ ವರ್ಷದ ಸಿದ್ಧತೆಗಳ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಇತ್ತೀಚೆಗೆ ರಾಜ್ಯದ 46,000 ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು […]

ಮಂಡ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಎತ್ತಿನಗಾಡಿ ಮೂಲಕ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ!

ಮಂಡ್ಯ: ದೇಶದಲ್ಲಿ ದಿನೇ ದಿನೇ ಗಗನಕ್ಕೇರುತ್ತಿರುವ ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರು ಮಂಡ್ಯದಲ್ಲಿ ಎತ್ತಿನಗಾಡಿ ಚಲಾಯಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು. ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಿಂದ ಸಂಜಯ್ ವೃತ್ತದವರೆಗೂ ನೂರಾರು ಕಾರ್ಯಕರ್ತರೊಂದಿಗೆ ಎತ್ತಿನಗಾಡಿ ಮೆರವಣಿಗೆ ನಡೆಸಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು. ಜನರಿಗೆ ನರಕದ ಪರಿಸ್ಥಿತಿ: ವಾಟಾಳ್ ಆಕ್ರೋಶ ಪ್ರತಿಭಟನೆಯನ್ನುದ್ದೇಶಿಸಿ […]

3ನೇ ಮಗುವಿಗೆ ₹30 ಸಾವಿರ, 4ನೇ ಮಗುವಿಗೆ ₹40 ಸಾವಿರ! ಜನಸಂಖ್ಯೆ ಹೆಚ್ಚಿಸಲು ಆಂಧ್ರ ಸಿಎಂ ಬಂಪರ್ ಆಫರ್!

ಆಂಧ್ರಪ್ರದೇಶ: ರಾಜ್ಯದಲ್ಲಿ ಜನಸಂಖ್ಯಾ ಬೆಳವಣಿಗೆಯ ದರ ಗಣನೀಯವಾಗಿ ಕುಸಿಯುತ್ತಿರುವ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. “ಮಕ್ಕಳನ್ನು ದೇಶದ ಹೊರೆ ಎಂದು ಭಾವಿಸಬಾರದು, ಅವರು ದೇಶದ ನಿಜವಾದ ಆಸ್ತಿ” ಎಂದು ಪ್ರತಿಪಾದಿಸಿರುವ ಅವರು, ಜನಸಂಖ್ಯೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಭರ್ಜರಿ ಪ್ರೋತ್ಸಾಹಧನವನ್ನು ಘೋಷಿಸಿದ್ದಾರೆ. ನರಸನ್ನಪೇಟದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮೂರು ಮತ್ತು ನಾಲ್ಕನೇ ಮಗುವಿಗೆ ಜನ್ಮ ನೀಡುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದಾಗಿ ಪ್ರಕಟಿಸಿದ್ದಾರೆ. ಮಕ್ಕಳು ದೇಶದ ಸಂಪತ್ತು, ಹೊರೆಯಲ್ಲ […]

ತಮಿಳುನಾಡು ಸಿಎಂ ವಿಜಯ್ ಕ್ಯಾಬಿನೆಟ್ ರೆಡಿ: ತಮ್ಮ ಬಳಿಯೇ ಉಳಿಯಿತು ಪವರ್‌ಫುಲ್ ಗೃಹ ಖಾತೆ! ಯಾರಿಗೆ ಯಾವ ಖಾತೆ?

ಚೆನ್ನೈ: ತಮಿಳುನಾಡಿನಲ್ಲಿ ಇತ್ತೀಚೆಗಷ್ಟೇ ಅಧಿಕಾರ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ನೂತನ ಸಚಿವ ಸಂಪುಟದ ಖಾತೆ ಹಂಚಿಕೆ ಅಧಿಕೃತವಾಗಿ ಪ್ರಕಟಗೊಂಡಿದೆ. ಮುಖ್ಯಮಂತ್ರಿಗಳ ಪ್ರಸ್ತಾವನೆಗೆ ರಾಜ್ಯಪಾಲರು ಮೇ 16ರಂದು ಅಂಕಿತ ಹಾಕಿದ್ದು, ರಾಜಭವನದಿಂದ ಹೊಸ ಇಲಾಖೆಗಳ ಹಂಚಿಕೆಯ ಸಂಪೂರ್ಣ ಪಟ್ಟಿ ಹೊರಬಿದ್ದಿದೆ. ನಿರೀಕ್ಷೆಯಂತೆಯೇ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ರಾಜ್ಯದ ಅತ್ಯಂತ ಪ್ರಮುಖ ಮತ್ತು ಪ್ರಭಾವಶಾಲಿ ಇಲಾಖೆಗಳಾದ ಗೃಹ ಮತ್ತು ಪೊಲೀಸ್ ಇಲಾಖೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಸಿಎಂ ಜೋಸೆಫ್ ವಿಜಯ್ ಅವರ ಬಳಿ […]

9, 10ನೇ ತರಗತಿ ಭಾಷಾ ನೀತಿಯಲ್ಲಿ CBSE ಬಿಗ್ ಚೇಂಜ್: 3 ಭಾಷೆಗಳ ಕಲಿಕೆ ಕಡ್ಡಾಯ

ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಮತ್ತು ಶಾಲಾ ಶಿಕ್ಷಣದ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು (NCF-SE) 2023ರ ಆಶಯಕ್ಕೆ ಅನುಗುಣವಾಗಿ, ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು (CBSE) 9 ಮತ್ತು 10ನೇ ತರಗತಿಗಳ ಭಾಷಾ ಕಲಿಕಾ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದೆ. ಎನ್‌ಸಿಇಆರ್‌ಟಿ (NCERT) ಪಠ್ಯಕ್ರಮಕ್ಕೆ ಪೂರಕವಾಗಿ ಸಿದ್ಧಪಡಿಸಲಾದ ಈ ನೂತನ ನಿಯಮಗಳು ಮುಂಬರುವ ಜುಲೈ 1, 2026 ರಿಂದ ಜಾರಿಗೆ ಬರಲಿವೆ ಎಂದು ಮಂಡಳಿಯ ಶೈಕ್ಷಣಿಕ ವಿಭಾಗದ ನಿರ್ದೇಶಕಿ ಪ್ರೊ. ಪ್ರಗ್ಯಾ ಎಂ. ಸಿಂಗ್ ತಿಳಿಸಿದ್ದಾರೆ. […]

ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ ಜಯಂ ರವಿ: ವಿಚ್ಛೇದನ ಸಿಗುವವರೆಗೂ ಹೋರಾಟ ಎಂದ ನಟ!

ಚೆನ್ನೈ: ತಮಿಳು ಚಿತ್ರರಂಗದ ಸ್ಟಾರ್ ನಟ ಜಯಂ ರವಿ (ರವಿ ಮೋಹನ್) ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಿಸುತ್ತಿರುವ ತೀವ್ರ ಮಾನಸಿಕ ನೆಮ್ಮದಿಯ ಕೊರತೆ ಮತ್ತು ಕೌಟುಂಬಿಕ ಕಲಹದ ಬಗ್ಗೆ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಮಾತನಾಡಿದ್ದಾರೆ. ಪತ್ನಿ ಆರತಿ ಅವರಿಂದ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿರುವ ರವಿ, ಪತ್ರಿಕಾಗೋಷ್ಠಿಯಲ್ಲಿ ತಮ್ಮ ಭಾವುಕ ಕ್ಷಣಗಳನ್ನು ಹಂಚಿಕೊಳ್ಳುತ್ತಾ ಕಣ್ಣೀರು ಹಾಕಿದ್ದಾರೆ. “ನನಗೆ ಕಾನೂನುಬದ್ಧವಾಗಿ ವಿಚ್ಛೇದನ ಸಿಗುವವರೆಗೂ ನಾನು ವಿಶ್ರಮಿಸುವುದಿಲ್ಲ ಮತ್ತು ನನ್ನ ಹಕ್ಕುಗಳಿಗಾಗಿ ಹೋರಾಡುವುದನ್ನು ನಿಲ್ಲಿಸುವುದಿಲ್ಲ” ಎಂದು ಅವರು […]