ನಾಗರ ಪಂಚಮಿ ಹಿಂದೂಗಳ ಪ್ರಮುಖ ಹಬ್ಬವಾಗಿದ್ದು, ಇದು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಬರುತ್ತದೆ. ಈ ದಿನ ನಾಗದೇವನಿಗೆ ಹಾಲು ಎರೆದು ಪೂಜಿಸಲಾಗುತ್ತದೆ. ಇದು ಪ್ರಕೃತಿ ಪ್ರೀತಿ, ಸಹೋದರ-ಸಹೋದರಿಯರ ಪ್ರೇಮ ಮತ್ತು ರಕ್ಷಣೆಯ ಸಂಕೇತವಾದ ವಿಶೇಷ ಹಬ್ಬವಾಗಿದೆ.
ಹಿಂದೂ ಪುರಾಣದಲ್ಲಿ ನಾಗ ಪಂಚಮಿಗೆ ವಿಶೇಷ ಸ್ಥಾನವಿದ್ದು, ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಮಹತ್ವದ ಹಬ್ಬವಾಗಿದೆ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ.
ಕೃಷ್ಣನು ಕಾಳಿಂಗ ಸರ್ಪವನ್ನು ವಧಿಸಿದ ದಿನವನ್ನೇ ನಾಗರ ಪಂಚಮಿಯೆಂದು ಆಚರಿಸಲಾಗುತ್ತಿದ್ದು ಒಮ್ಮೆ ಮಾತೃ ಶಾಪದಿಂದ ನಾಗಲೋಕವು ಬೆಂಕಿಯಿಂದ ಉರಿಯುತ್ತದೆ. ಬೆಂಕಿಯ ಉರಿಯನ್ನು ತಾಳಲಾರದೇ ಸರ್ಪಗಳು ಹಸುವಿನ ಹಾಲಿನಿಂದ ಸ್ನಾನವನ್ನು ಮಾಡಿದವು ಎನ್ನಲಾಗಿದೆ ಹಸುವಿನ ಹಾಲು ಬೆಂಕಿಯಿಂದ ಸುಟ್ಟ ಉರಿಯನ್ನು ನಾಶಮಾಡುತ್ತದೆ. ಆದ್ದರಿಂದ ನಾಗರ ಪಂಚಮಿ ದಿನದಂದು ನಾಗಗಳಿಗೆ ಹಾಲಿನ ಅಭಿಷೇಕ ಮಾಡುವುದರಿಂದ ಮಾನವರ ದೋಷಗಳು ನಿವಾರಣೆಯಾಗುತ್ತದೆ. ನಾಗಗಳಿಗೆ ಹಾಲಿನ ಅಭಿಷೇಕ ಮಾಡುವುದರಿಂದ ನಾಗಗಳಲ್ಲೇ ಶ್ರೇಷ್ಠವೆಂದು ಪರಿಗಣಿಸಲಾಗುವ ಶೇಷನಾಗ, ವಾಸುಕಿಯು ಆಶೀರ್ವಾದಿಸುತ್ತಾರೆ ಎನ್ನುವ ನಂಬಿಕೆಯಿದೆ.
ಈ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ತೆರಳಿ ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ.ನಾಗರ ಪಂಚಮಿಯು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಆಚರಿಸಲಾಗುವ ಪ್ರಮುಖ ಹಿಂದೂ ಹಬ್ಬವಾಗಿದೆ. ಈ ದಿನ ನಾಗದೇವನಿಗೆ ಪೂಜೆ ಸಲ್ಲಿಸಿ, ಕುಟುಂಬದ ರಕ್ಷಣೆ, ಆರೋಗ್ಯ ಹಾಗೂ ಸಮೃದ್ಧಿಯನ್ನು ಕೋರಲಾಗುತ್ತದೆ. ಪ್ರಕೃತಿ ಮತ್ತು ಜೀವಸಂಕುಲದೊಂದಿಗೆ ಸಾಮರಸ್ಯ ಮೂಡಿಸಲು ಹಾಗೂ ಸರ್ಪ ದೋಷ ನಿವಾರಣೆಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಈ ಹಬ್ಬವು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ. ನಾಗ ಪಂಚಮಿ ಹಬ್ಬಗಳ ಸಾಲಿಗೆ ನಾಂದಿ ಹಾಡುತ್ತದೆ. ನಾಗರ ಪಂಚಮಿಯ ನಂತರ ರಕ್ಷಾಬಂಧನ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಹಬ್ಬಗಳು ಒಂದರ ಹಿಂದೊಂತರಂತೆ ಆರಂಭವಾಗುತ್ತದೆ. ನಾಗರ ಪಂಚಮಿಯನ್ನು ಭಾರತದ ಹಲವಾರು ಪ್ರಾಂತ್ಯಗಳಲ್ಲಿ ಆಚರಿಸಲಾಗುತ್ತದೆ.
ಮಹಾಭಾರತ ಮಹಾಕಾವ್ಯದಲ್ಲಿ , ಅಸ್ತಿಕ ಋಷಿಯು ರಾಜ ಜನಮೇಜಯನನ್ನು ಯಜ್ಞ ಮಾಡುವುದನ್ನು ನಿಲ್ಲಿಸಿ ಅಂತಿಮವಾಗಿ ಸರ್ಪ ಜನಾಂಗವನ್ನು ನಾಶಮಾಡುತ್ತಾನೆ. ಈ ಯಜ್ಞವನ್ನು ಜನಮೇಜಯನು ತನ್ನ ತಂದೆ ಪರೀಕ್ಷಿತನನ್ನು ಸರ್ಪಗಳ ರಾಜ ತಕ್ಷಕನಿಂದ ಕೊಲ್ಲಲ್ಪಟ್ಟನೆಂದು ಹೇಳಲಾಗುತ್ತದೆ . ಯಜ್ಞವನ್ನು ನಿಲ್ಲಿಸಿದ ದಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯ ದಿನವಾಗಿತ್ತು. ಈ ಯಜ್ಞದ ಸಮಯದಲ್ಲಿ, ಒಟ್ಟಾರೆಯಾಗಿ ಮಹಾಭಾರತವನ್ನು ಮೊದಲು ಋಷಿ ವೈಶಂಪಾಯನ ನಿರೂಪಿಸಿದರು ಅಂದಿನಿಂದ ಆ ದಿನವನ್ನು ನಾಗ ಪಂಚಮಿ ಎಂದು ಆಚರಿಸಲಾಗುತ್ತದೆ.
ನಾಗ ಪಂಚಮಿಯ ದಿನದಂದು, ನಾಗ, ನಾಗರಹಾವುಗಳು ಮತ್ತು ಹಾವುಗಳನ್ನು ಹಾಲು, ಸಿಹಿತಿಂಡಿಗಳು, ಹೂವುಗಳು, ದೀಪಗಳು ಮತ್ತು ಬಲಿಗಳಿಂದ ಪೂಜಿಸಲಾಗುತ್ತದೆ. ಬೆಳ್ಳಿ, ಕಲ್ಲು, ಮರ ಅಥವಾ ಗೋಡೆಯ ಮೇಲಿನ ವರ್ಣಚಿತ್ರಗಳಿಂದ ಮಾಡಿದ ನಾಗ ಅಥವಾ ಸರ್ಪ ದೇವತೆಗಳನ್ನು ಮೊದಲು ನೀರು ಮತ್ತು ಹಾಲಿನಿಂದ ಸ್ನಾನ ಮಾಡಿ ನಂತರ ಈ ಕೆಳಗಿನ ಮಂತ್ರಗಳನ್ನು ಪಠಿಸುವ ಮೂಲಕ ಪೂಜಿಸಲಾಗುತ್ತದೆ.





