ಶ್ರೀರಂಗಪಟ್ಟಣ ದಿಂದ ಚಂದ್ರಯಾನ-3 ರವರೆಗೆ ಭಾರತದ ರಾಕೆಟ್ ಪಯಣ- ಇಲ್ಲಿದೆ ನೋಡಿ ಮಾಹಿತಿ

ಆಗಸ್ಟ್ 23 ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿದ್ದು,LVM-3 ರಾಕೆಟ್ ಮತ್ತು ಚಂದ್ರಯಾನ-3 ಲ್ಯಾಂಡರ್ ಕೇವಲ 2023ರ ಸಾಧನೆಯಲ್ಲ. ಅದರ ಬೇರು 230 ವರ್ಷಗಳ ಹಿಂದೆ ನಮ್ಮ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇದೆ ಎಂಬುದಕ್ಕೆ ಐತಿಹಾಸಿಕ ಆಧಾರಗಳಿವೆ. ವಿಶ್ವದ ಮೊದಲ ಕಬ್ಬಿಣದ ರಾಕೆಟ್ ಹುಟ್ಟಿದ್ದು ಶ್ರೀರಂಗಪಟ್ಟಣದಲ್ಲಿ ಎನ್ನಲಾಗಿದೆ. 18ನೇ ಶತಮಾನದವರೆಗೆ ಜಗತ್ತಿನೆಲ್ಲೆಡೆ ರಾಕೆಟ್ ಎಂದರೆ ಬಿದಿರಿನ ಕೊಳವೆಯ ಪಟಾಕಿ. ಆದರೆ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರು ಮೊದಲ ಬಾರಿಗೆ ಕಬ್ಬಿಣದ ಕೊಳವೆ ಬಳಸಿ ಯುದ್ಧ ರಾಕೆಟ್ ತಯಾರಿಸಿದರು.ಆಧಾರ:ಬ್ರಿಟಿಷ್ […]
ಮಹಿಳೆಯರು ಪಿತೃಪ್ರಧಾನ ವ್ಯವಸ್ಥೆಯನ್ನು ಕೊನೆಗಾಣಿಸಬೇಕು -ರಾಹುಲ್ ಗಾಂಧಿ

ಇತ್ತೀಚೆಗೆ ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಹುಡುಗರೂ ಕೂಡ ನಿಂದನೆಯಲ್ಲಿ ತೊಡಗಿದ್ದರೂ, ಪ್ರಧಾನಿ ನರೇಂದ್ರ ಮೋದಿ ಕೇವಲ ಹುಡುಗಿಯರನ್ನು ಮಾತ್ರ ಗುರಿಯಾಗಿಸಿದರು ಎಂದು ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಪುಣೆಯ ಎಸ್ಎಸ್ಪಿಎಂಎಸ್ ಮೈದಾನದಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರನ್ನು ಪಂಜರದೊಳಗೆ ಬಂಧಿಸಿಡಲು ಬಯಸುವ ಮನಸ್ಥಿತಿಯನ್ನು ಬಿಜೆಪಿ ಮತ್ತು ಆರ್ಎಸ್ಎಸ್ ಹೊಂದಿವೆ ಎಂದು ಹೇಳಿದರು. ದೊಡ್ಡ ಪರದೆ ಮೇಲೆ ಪ್ರದರ್ಶಿಸಲಾದ ಹಲವು ಸ್ಲೈಡ್ಗಳ ಮೂಲಕ, […]
ಚೀನಾದ ಜೊತೆ ವ್ಯಾಪಾರ ಮಾಡುತ್ತೇವೆ, ಆದರೆ ಹಿತಾಸಕ್ತಿಯಲ್ಲಿ ರಾಜಿ ಇಲ್ಲ : ಎಸ್. ಜೈಶಂಕರ್

ನವದೆಹಲಿ: ಚೀನಾದ ಜೊತೆ ವ್ಯಾಪಾರ ಮಾಡುತ್ತೇವೆ, ಆದರೆ ಹಿತಾಸಕ್ತಿಯಲ್ಲಿ ರಾಜಿ ಇಲ್ಲ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತ ಜಾಗತಿಕ ಆರ್ಥಿಕತೆಯೊಂದಿಗೆ ಮತ್ತಷ್ಟು ತೊಡಗಿಸಿಕೊಳ್ಳಬೇಕಿದ್ದು, ಅದರಲ್ಲಿ ಚೀನಾವೂ ಸೇರಿದೆ. ಆದರೆ ಚೀನಾದೊಂದಿಗೆ ಆರ್ಥಿಕ ಸಂಬಂಧ ಹೊಂದುವ ಜತೆಗೆ ಭಾರತ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳ ವಿಚಾರದಲ್ಲಿ ದೃಢವಾಗಿ ನಿಲ್ಲಬೇಕು ಎಂದರು. ಜಗತ್ತು ಸ್ಪರ್ಧಾತ್ಮಕವಾಗಿದೆ. ನಾವು ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಇಡೀ ಜಗತ್ತಿನೊಂದಿಗೆ ವ್ಯಾಪಾರ ಮಾಡಬೇಕು. […]
‘ನಮ್ಮದು ಸಂಸ್ಕೃತಿಯ ಬೃಂದಾವನ, ಕಾಂಗ್ರೆಸ್ನದ್ದು ಸೂಟ್ಕೇಸ್ ಬೃಂದಾವನ’ : ಹೆಚ್ಡಿಕೆ

ರಾಮನಗರ: ‘ನಮ್ಮದು ಸಂಸ್ಕೃತಿಯ ಬೃಂದಾವನ, ಕಾಂಗ್ರೆಸ್ನದ್ದು ಸೂಟ್ಕೇಸ್ ಬೃಂದಾವನ’ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ ಎಂದು ಟೀಕಿಸಿದ್ದ ಡಿ.ಕೆ. ಸುರೇಶ್ ಹಾಗೂ ಸಚಿವ ಹೆಚ್.ಸಿ. ಬಾಲಕೃಷ್ಣ ಅವರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ವ್ಯಂಗ್ಯವಾಡಿದ್ದಾರೆ. ರಾಮನಗರದ ಅಕ್ಕೂರು ಗ್ರಾಮದಲ್ಲಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ನೈಸ್ ರಸ್ತೆ ಟೋಲ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವೆ ಮತ್ತೆ ವಾಕ್ಸಮರ ಶುರುವಾಗಿದೆ. ನೈಸ್ ರಸ್ತೆಯಲ್ಲಿ ಟೋಲ್ […]
Irumudi Movie Review : ಅಯ್ಯಪ್ಪ ಸ್ವಾಮಿ ಮೇಲಿನ ಅಪಾರ ಭಕ್ತಿ- ಅಪ್ಪನ ಪ್ರೀತಿ ಮಗಳಿಗೆ ಶಕ್ತಿ : ಇಲ್ಲಿದೆ ನೋಡಿ ಇರುಮುಡಿ ಚಲನಚಿತ್ರದ ವಿಮರ್ಶೆ

ಅಪ್ಪ ಎಂದರೆ ಮೊದಲ ಪ್ರೀತಿ ಮೊದಲ ಧೈರ್ಯ ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಅಮ್ಮನ ಮೇಲಿನ ಮಮತೆಗಿಂತ ಅಪ್ಪ ಎಂದರೆ ಸಾಕು ಎಲ್ಲಿಲ್ಲದ ಒಂದು ಭರವಸೆ. ಪ್ರತಿಯೊಬ್ಬ ಹೆಣ್ಣು ಮಗಳ ಜೀವನದಲ್ಲಿ ಅಪ್ಪನ ಪಾತ್ರ ಬಹಳ ಮಹತ್ವವನ್ನು ಹೊಂದಿದೆ. ಇತ್ತೀಚಿಗೆ ತೆಲಗು,ತಮಿಳು ಚಿತ್ರಗಳು ಸಿನಿ ರಂಗದಲ್ಲಿ ಸದ್ದು ಮಾಡುತ್ತಿವೆ. ಅಲ್ಲದೇ ಇದೀಗ ಅಷ್ಟೇ ಬಿಡುಗಡೆಯಾದ ಇರುಮುಡಿ ಚಲನಚಿತ್ರ ಎಲ್ಲರ ಮೆಚ್ಚುಗೆ ಪಾತ್ರವಾಗುತ್ತಿದೆ. ಹೌದು ಪಿತೃತ್ವ ಮತ್ತು ನಾವು ಹೆಣ್ಣು ಮಕ್ಕಳನ್ನು ಹೇಗೆ ಬೆಳೆಸುತ್ತೇವೆ ಎಂಬುದರ ಕುರಿತು ಈ ಚಿತ್ರದಲ್ಲಿ […]
Ramalinga Reddy: ಯಡಿಯೂರಪ್ಪ ಕಾಲದಲ್ಲೇ 4 ಶೂಟೌಟ್ ಆಗಿ, ಮೂರು ಜನ ಸತ್ತಿದ್ದರು: ರಾಮಲಿಂಗಾರೆಡ್ಡಿ

ಬೆಂಗಳೂರು: ಚಾ.ನಗರದಲ್ಲಿ ಕಳ್ಳಬೇಟೆ ಶಿಬಿರಗಳಿಂದ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಹಾನಿಮಾಡಿದವರು ಯಾರೆಂಬುದನ್ನ ಪೊಲೀಸರು ಗುರುತಿಸಿದ್ದಾರೆ. ಅವ್ರು ಹಿಂದಿನ ಕೇಸ್ ಗಳಲ್ಲಿ ಇದ್ದಂಥವರು. ಆದರೂ ರಿಪೋರ್ಟ್ ನಲ್ಲಿ ಏನು ಬಂದಿದೆ ಅದರಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ, ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಅಧಿಕಾರಿಗಳದ್ದು ಏನಾದರೂ ತಪ್ಪಿದ್ದರೆ, ಅವರ ವಿರುದ್ಧ ಶಿಶ್ತು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈ ಹಿಂದೆ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ 4 ಶೂಟೌಟ್ ಆಗಿತ್ತು. […]
ದ್ವಿತೀಯ ನಿರ್ಬಂಧಗಳಿಗೆ ಅಂತರರಾಷ್ಟ್ರೀಯ ಕಾನೂನಿನಲ್ಲಿ ಯಾವುದೇ ಆಧಾರವಿಲ್ಲ- ಇರಾನ್ ಆಕ್ರೋಶ

ಅಮೆರಿಕ ಇರಾನ್ ಗೆ ಯಾರು ಸಹಾಯ ಮಾಡುತ್ತಾರೋ ಅವರ ವಿರುದ್ಧವೂ ಸಹ ಪ್ರತಿಕಾರ ತೀರಿಸಿಕೊಳ್ಳಲಿಉ ಸಜ್ಜಾಗಿದೆ. ಅಲ್ಲದೆ ಅಮೆರಿಕ ಇತ್ತೀಚೆಗೆ ಘೋಷಿಸಿರುವ ಹೊಸ ದ್ವಿತೀಯ ನಿರ್ಬಂಧಗಳ ವಿರುದ್ಧ ಇರಾನ್ ತೀವ್ರ ಆಕ್ರೋಶ ಹೊರಹಾಕಿದೆ. ಇರಾನ್ ಜೊತೆ ಕಾನೂನುಬದ್ಧವಾಗಿ ವ್ಯಾಪಾರ ನಡೆಸುವ ಇತರ ಸ್ವತಂತ್ರ ರಾಷ್ಟ್ರಗಳನ್ನು ಬಲವಂತವಾಗಿ ತಡೆಯುವ ಅಮೆರಿಕದ ಈ ನೀತಿಯು “ಸ್ಪಷ್ಟ ಮತ್ತು ಪೂರ್ಣ ಪ್ರಮಾಣದ ಹೊಸ ವಸಾಹತುಶಾಹಿ” ಎಂದು ಇರಾನ್ ಕಿಡಿಕಾರಿದೆ. ಅಮೆರಿಕದ ಕ್ರಮಗಳು “ಬಹಿರಂಗ ಹಾಗೂ ಸಂಪೂರ್ಣ ವಸಾಹತುಶಾಹಿ” ಮರಳುವ ಸಾಧ್ಯತೆಯನ್ನು ಸೃಷ್ಟಿಸಬಹುದು […]
ಬಿಜೆಪಿಗೆ ಸ್ವಲ್ಪವಾದರೂ ನಾಚಿಕೆಯಿದ್ದಿದ್ದರೆ, ಅವರು ಆಗಲೇ ಸ್ವತಂತ್ರ ತನಿಖೆಗೆ ಆದೇಶಿಸುತ್ತಿದ್ದರು: ಮೋದಿ, ಶಾಗೆ ಪ್ರಿಯಾಂಕ್ ಖರ್ಗೆ ಟಾಂಗ್

ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆತೀವ್ರ ವಾಗ್ದಾಳಿ ನಡೆಸಿದ್ದಾರೆ, ‘ವಂದೇ ಮಾತರಂ’ ಕುರಿತಾದ ವಿವಾದವು ತುರ್ತು ಆರ್ಥಿಕ ಸಮಸ್ಯೆಗಳು, ನಿರುದ್ಯೋಗ ಮತ್ತು ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧದ ಪೊಲೀಸ್ ಕ್ರಮದಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಸೃಷ್ಟಿಸಲಾದ ಉದ್ದೇಶಪೂರ್ವಕ ತಂತ್ರವಾಗಿದೆ’ ಎಂದು ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರತಿಭಟನಾಕಾರರ ವಿರುದ್ಧ ಪೆಲೆಟ್ ಗನ್ ಬಳಕೆ ಕುರಿತು ಎಫ್ಐಆರ್ ದಾಖಲಿಸಲು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೆಹಲಿಯ ಪೊಲೀಸ್ […]
ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಔಪಚಾರಿಕ ವಹಿವಾಟಿನ ಪ್ರಮಾಣ ಹೆಚ್ಚಾಗಿದೆ: ಸಿಎಂ ಡಿಕೆ.ಶಿವಕುಮಾರ್

ಬೆಂಗಳೂರು: ದೇಶದ ಆರ್ಥಿಕತೆಗೆ ಕರ್ನಾಟಕದ ಕೊಡುಗೆಯನ್ನು ಸಿಎಂ ಡಿಕೆ ಶಿವಕುಮಾರ್ ಅವರು ಪ್ರಸ್ತಾಪಿಸಿದ್ದಾರೆ, ದಕ್ಷಿಣ ಭಾರತವು ಭಾರತದ ಪ್ರಗತಿಯನ್ನು ಮುನ್ನಡೆಸುವ ‘ಇಂಧನ’ ಎಂದು ಹೇಳಿದ್ದಾರೆ. ಬೆಣಗಳೂರಿನಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯ ಕರ್ನಾಟಕವಾಗಿದ್ದು, ತನ್ನ ಕೊಡುಗೆಗೆ ಅನುಗುಣವಾಗಿ ರಾಜ್ಯಕ್ಕೆ ಸಂಪನ್ಮೂಲಗಳ ನ್ಯಾಯಯುತ ಪಾಲು ದೊರೆಯಬೇಕು ಎಂದು ತಿಳಿಸಿದರು. ಇತರ ಹಲವು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಔಪಚಾರಿಕ ವಹಿವಾಟಿನ ಪ್ರಮಾಣ ಹೆಚ್ಚಾಗಿದೆ ಎಂದರು. ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಪ್ರತಿಕೂಲ ಪರಿಣಾಮ ಬೀರದಂತೆ […]
ಇರಾನ್ಗೆ ಆರ್ಥಿಕ ನೆರವು ನೀಡುವ ದೇಶಗಳ ವಿರುದ್ಧವೂ ನಿರ್ಬಂಧ ವಿಧಿಸುವ ಸಾಧ್ಯತೆ- ಸ್ಕಾಟ್ ಬೆಸೆಂಟ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಯಕಟ್ಟಿನ ಹಾರ್ಮುಜ್ ಜಲಸಂಧಿಯನ್ನು “ಅಮೆರಿಕದ ಭೂಭಾಗ” ಎಂದು ಘೋಷಿಸಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ಜಲ, ಭೂಮಿ, ಆಕಾಶ್ ಮತ್ತು ಸೈಬರ್ ಮೂಲಕ “ವಿನಾಶಕಾರಿ” ಸೇನಾ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಸಿದೆ.ಹಾರ್ಮುಜ್ ಜಲಸಂಧಿಯ ವಿಚಾರದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ತೀವ್ರ ರಾಜತಾಂತ್ರಿಕ ಹಾಗೂ ಆರ್ಥಿಕ ಸಂಘರ್ಷ ಏರ್ಪಟ್ಟಿದೆ. ಟೆಹ್ರಾನ್ ಮೇಲೆ ಒತ್ತಡ ಹೇರಲು ಹಾಗೂ ಅಲ್ಲಿನ ಆಡಳಿತವನ್ನು ಉರುಳಿಸಲು ಟ್ರಂಪ್ ಆಡಳಿತವು ಇತಿಹಾಸದಲ್ಲೇ ಅತ್ಯಂತ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸುವುದಾಗಿ ಘೋಷಿಸಿರುವ ಬೆನ್ನಲ್ಲೇ […]