ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿ ಕೈವಶ ಮಾಡಿಕೊಂಡ ಟೀಮ್ ಇಂಡಿಯಾ!

ಲಖನೌನ ಏಕಾನಾ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡ 170 ರನ್ಗಳ ಬೃಹತ್ ಅಂತರದ ಸೌರಭ ಜಯ ದಾಖಲಿಸಿದೆ. ಈ ದಿಗಂತ ವಿಜಯದೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಆತಿಥೇಯ ಭಾರತ ತಂಡ 2-0 ಮುನ್ನಡೆಯೊಂದಿಗೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಗಿಲ್-ಕಿಶನ್ ಶತಕದ ಆರ್ಭಟ: ಟೀಮ್ ಇಂಡಿಯಾಗೆ ರನ್ ಬೆಟ್ಟ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವಂತಾದ ಭಾರತ ತಂಡಕ್ಕೆ ಆರಂಭಿಕರೇ ಭದ್ರ ಬುನಾದಿ ಹಾಕಿಕೊಟ್ಟರು. […]
ನಿಮ್ಮ ಆಹಾರ ಕ್ರಮದಲ್ಲಿ ಈ ಪ್ರೋಟೀನ್ ಯುಕ್ತ ಆಹಾರಗಳಿದ್ದರೇ, ಸದೃಢ ಆರೋಗ್ಯ ಖಚಿತ

ನಮ್ಮ ದೇಹದ ಒಟ್ಟಾರೆ ಆರೋಗ್ಯ, ಸ್ನಾಯುಗಳ ಬೆಳವಣಿಗೆ (Muscle Growth), ಮತ್ತು ಅಂಗಾಂಶಗಳ ದುರಸ್ತಿಗೆ ಪ್ರೋಟೀನ್ (Protein) ಅತ್ಯಂತ ಅಗತ್ಯವಾದ ಪೋಷಕಾಂಶವಾಗಿದೆ. ಪ್ರೋಟೀನ್ ಕೇವಲ ಜಿಮ್ಗೆ ಹೋಗುವವರಿಗೆ ಮಾತ್ರವಲ್ಲ, ಪ್ರತಿಯೊಬ್ಬ ಸಾಮಾನ್ಯ ಮನುಷ್ಯನ ದೈನಂದಿನ ದೈಹಿಕ ಕ್ರಿಯೆಗಳಿಗೂ ಬೇಕೇ ಬೇಕು. ಇದು ನಮ್ಮ ದೇಹಕ್ಕೆ ಶಕ್ತಿ ನೀಡುವುದಲ್ಲದೆ, ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುವ ಮೂಲಕ ತೂಕ ನಿಯಂತ್ರಣಕ್ಕೂ ಸಹಾಯ ಮಾಡುತ್ತದೆ. ನೀವು ಸಸ್ಯಾಹಾರಿಗಳಾಗಿರಲಿ ಅಥವಾ ಮಾಂಸಾಹಾರಿಗಳಾಗಿರಲಿ, ನಿಮ್ಮ ದೈನಂದಿನ ಆಹಾರದಲ್ಲಿ ಸುಲಭವಾಗಿ ಸೇರಿಸಿಕೊಳ್ಳಬಹುದಾದ 7 ಅತ್ಯುತ್ತಮ ಪ್ರೋಟೀನ್ […]
ಸುಳ್ಳು ವದಂತಿ ಹರಡಿದ ಕಿಡಿಗೇಡಿಗಳ ವಿರುದ್ಧ ಹಿರಿಯ ನಟ ದೊಡ್ಡಣ್ಣ ಸೈಬರ್ ಕ್ರೈಂ ಠಾಣೆಗೆ ದೂರು

ಬೆಂಗಳೂರು: “ನನ್ನ ಸಾವಿನ ಸುಳ್ಳು ಸುದ್ದಿ ಹಬ್ಬಿಸಿದ ಆ ಮುಖೇಡಿಗಳನ್ನು ಯಾವುದೇ ಕಾರಣಕ್ಕೂ ಬಿಡಬೇಡಿ, ಅವರ ಹೆಡೆಮುರಿ ಕಟ್ಟಿ ಪರಪ್ಪನ ಅಗ್ರಹಾರ ಜೈಲಿಗೆ ತಳ್ಳಿ” ಎಂದು ಸ್ಯಾಂಡಲ್ವುಡ್ನ ಹಿರಿಯ ನಟ ದೊಡ್ಡಣ್ಣ ಅವರು ಸೈಬರ್ ಪೊಲೀಸರ ಮುಂದೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕಳೆದ ಕೆಲವು ದಿನಗಳಿಂದ ತಂಗಾಳಿಯಂತೆ ಹರಡಿದ್ದ ತಪ್ಪು ಮಾಹಿತಿಗೆ ಬ್ರೇಕ್ ಹಾಕಲು ಅವರು ಕಾನೂನು ಹೋರಾಟದ ಮೊರೆ ಹೋಗಿದ್ದಾರೆ. ದೊಡ್ಡಣ್ಣ ಅವರು ವಿಧಿವಶರಾಗಿದ್ದಾರೆ ಎಂಬ ಸುಳ್ಳು ಪೋಸ್ಟ್ಗಳು ಇಡೀ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದವು. […]
ಅದಿತ್ಯ ರಾಜ್ ಕ್ಯಾಪಿಟಲ್ಸ್ ಸೇಲ್ಸ್ ಹೆಡ್ಗೆ ಬಿಗ್ ರಿಲೀಫ್: ಕೋರ್ಟ್ನಿಂದ ಮಧ್ಯಂತರ ಜಾಮೀನು ಮಂಜೂರು!

ಬೆಂಗಳೂರು: ಸಾರ್ವಜನಿಕರನ್ನು ಕೋಟ್ಯಂತರ ರೂಪಾಯಿ ಹೂಡಿಕೆ ಜಾಲಕ್ಕೆ ಸೆಳೆದು ವಂಚಿಸಿದ ಆರೋಪ ಎದುರಿಸುತ್ತಿರುವ ‘ಆದಿತ್ಯ ರಾಜ್ ಕ್ಯಾಪಿಟಲ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ರಾಷ್ಟ್ರೀಯ ಮಾರಾಟ ವಿಭಾಗದ ಮುಖ್ಯಸ್ಥ (National Sales Head) ಸಂದೀಪ್ ಗಿರಿಧರ್ ಅವರಿಗೆ ರಾಜಧಾನಿಯ ವಿಶೇಷ ನ್ಯಾಯಾಲಯವು ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿ ಬುಧವಾರ ಆದೇಶಿಸಿದೆ. ಲಾಭಾಂಶದ ಆಮಿಷವೊಡ್ಡಿ ಜನರಿಂದ ಬರೋಬ್ಬರಿ 211 ಕೋಟಿ ರೂಪಾಯಿ ಸಂಗ್ರಹಿಸಿದ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಇವರಿಗೆ, ಬಂಧನದಿಂದ ಪಾರಾಗಲು ಈ ಆದೇಶ ನೆರವಾಗಿದೆ. ತಲೆಮರೆಸಿಕೊಂಡಿದ್ದ ಆಡಳಿತ […]
PhD ವಿದ್ಯಾರ್ಥಿನಿ ಜೊತೆ ಅಕ್ರಮ ಸಂಬಂಧ ಆರೋಪ; ಕರ್ನಾಟಕ ವಿವಿ ಪ್ರೊಫೆಸರ್ ತಂಗುದೊರೈ ಸಸ್ಪೆಂಡ್!

ಧಾರವಾಡ: ಸಂಶೋಧನಾ ವಿದ್ಯಾರ್ಥಿನಿಯೊಂದಿಗೆ ದೈಹಿಕ ಹಾಗೂ ಅನೈತಿಕ ಸಂಬಂಧ ಹೊಂದಿದ ಗಂಭೀರ ಆರೋಪಕ್ಕೆ ಗುರಿಯಾಗಿರುವ ಕರ್ನಾಟಕ ವಿಶ್ವವಿದ್ಯಾಲಯದ (KUD) ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ದೇವರಾಜನ್ ತಂಗುದೊರೈ ಅವರನ್ನು ವಿಶ್ವವಿದ್ಯಾಲಯದ ಸಿಂಡಿಕೇಟ್ ಆಡಳಿತ ಮಂಡಳಿಯು ಸೇವೆಯಿಂದ ಅಮಾನತುಗೊಳಿಸಿ ಬುಧವಾರ ಅದೇಶ ಹೊರಡಿಸಿದೆ. ವಿಶ್ವವಿದ್ಯಾಲಯದ ಮುಖ್ಯ ಕಚೇರಿ ಮುಂಭಾಗದಲ್ಲಿ ಎಬಿವಿಪಿ (ABVP) ಕಾರ್ಯಕರ್ತರು ಹಮ್ಮಿಕೊಂಡಿದ್ದ ಉಗ್ರ ಪ್ರತಿಭಟನೆ ಹಾಗೂ ಆಕ್ರೋಶದ ಬಳಿಕ ಕವಿವಿ ಆಡಳಿತ ಈ ಕಠಿಣ ಕ್ರಮ ಜರುಗಿಸಿದೆ. ಇನ್ಸ್ಟಾಗ್ರಾಮ್ ಪೋಸ್ಟ್ನಿಂದ ಸೃಷ್ಟಿಯಾದ ವಿವಾದ: ದೂರಿನ ಅನ್ವಯ, […]
ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ: ಜಮೀರ್ ಅಹ್ಮದ್

ಬೆಂಗಳೂರು : ನಮ್ಮದು ಹೈಕಮಾಂಡ್ ಪಕ್ಷ. ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನ ಸಿಗದಿದ್ದರೂ, ಎರಡನೇ ಪಟ್ಟಿಯಲ್ಲಿ ಸಿಗುವ ವಿಶ್ವಾಸವಿದೆ ಎಂದು ಡಿಕೆ ಸುರೇಶ್ ಭೇಟಿ ಬಳಿಕ ಮಾಜಿ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಬೆಂಬಲಿಗರ ಪ್ರತಿಭಟನೆ ಸಹಜ, ನನಗೇನೂ ಬೇಸರವಿಲ್ಲ ನಾನು ಯಾವತ್ತೂ ಬೇಜಾರ್ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.ಇದೇ ಸಮಯದಲ್ಲಿ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ನ ಐದೂ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಪಂಚದ ಎಲ್ಲಾ ಜ್ಞಾನ ಒಂದೇ ಸುೂರಿನಡಿ ತರುವ ತವಕ ನನ್ನದು : ಎಂ ಅಂಕೇಗೌಡ

ಶ್ರೀರಂಗಪಟ್ಟಣ: ಪ್ರಪಂಚದ ಎಲ್ಲಾ ಜ್ಞಾನವನ್ನು ಒಂದೇ ಸೂರಿ ನುಡಿ ತರುವ ತವಕ ನನ್ನದು. ಅರ್ಧ ಶತಮಾನದ ಪರಿಶ್ರಮದಿಂದ ಹಂಚುವ ಪುಸ್ತಕ ಮನೆ ಸ್ಥಾಪನೆಗಾಗಿ 2026ರ ಅನ್ಸಂಗ್ ಹೀರೋಸ್ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿ ನನಗೆ ಸಿಕ್ಕಿದೆ ಎಂದು ಪದ್ಮಶ್ರೀ ಪುರಸ್ಕೃತ ಎಂ ಅಂಕೇಗೌಡ ತಿಳಿಸಿದರು. ಶ್ರೀರಂಗಪಟ್ಟಣದ ಸಂಜಯ ಪ್ರಕಾಶನ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ನನ್ನದೊಂದು ಬಯಕೆ ಇದೆ, ಇತಿಹಾಸ ಪುಟಗಳಲ್ಲಿ ಸಾವಿರ ವರ್ಷಗಳ ಹಿಂದೆ ನಮ್ಮ ನಳಂದ ವಿಶ್ವವಿದ್ಯಾನಿಲಯದಲ್ಲಿ ಧರ್ಮಗಂಜ್ ಎಂಬ ಮೂರು ಅಂತಸ್ತಿನ […]
ರಾಜ್ಯದ 232 ಗ್ರೇಡ್-2 ತಹಶೀಲ್ದಾರ್ ಗಳಿಗೆ ಗ್ರೇಡ್-1 ಹುದ್ದೆಗೆ ಮುಂಬಡ್ತಿ ನೀಡಿ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಕಂದಾಯ ಇಲಾಖೆಯ ತಹಶೀಲ್ದಾರ್ಗಳ ವಲಯದಲ್ಲಿ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮುಂಬಡ್ತಿ ಪ್ರಕ್ರಿಯೆಗೆ ಕೊನೆಗೂ ಚಾಲನೆ ಸಿಕ್ಕಿದ್ದು, ಒಟ್ಟು 232 ಅಧಿಕಾರಿಗಳಿಗೆ ಗ್ರೇಡ್-1 ಹುದ್ದೆಗೆ ಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಮಹತ್ವದ ನಿರ್ಧಾರವು ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಮತ್ತು ನೌಕರರ ಅರ್ಹತೆಯನ್ನು ಗೌರವಿಸುವ ಸರ್ಕಾರದ ದೃಢ ಸಂಕಲ್ಪವನ್ನು ಬಿಂಬಿಸಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅವರು, ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಜಟಿಲ ಸಮಸ್ಯೆಯನ್ನು […]
ಜುಲೈ.3ರಂದು ಕೃತ್ವಿಕ್ ನಿರ್ದೇಶನದ ಲವ್ ಸೀಸನ್ಸ್ ಚಿತ್ರ ತೆರೆಗೆ

ಇದೇ ಜುಲೈ 3ರಂದು ಕೃತ್ವಿಕ್ ನಿರ್ದೇಶನದ ಲವ್ ಸೀಸನ್ಸ್ ಚಿತ್ರ ರಾಜ್ಯಾದ್ಯಂತ ತೆರೆಕಾಣಲಿದೆ. ಬಿಡುಗಡೆಗಾಗಿ ತಯಾರಾಗುತ್ತಿರುವ ಚಿತ್ರತಂಡವೀಗ ಬಿಡುಗಡೆಗೊಂಡಿರುವ ಮೂರು ಹಾಡುಗಳಿಗೆ ಕೇಳುಗರ ಕಡೆಯಿಂದ ಸಿಗುತ್ತಿರೋ ಭರಪೂರ ಪ್ರತಿಕ್ರಿಯೆ ಕಂಡು ಖುಷಿಗೊಂಡಿದೆ. ಈ ಸಂಬಂಧವಾಗಿ ಪತ್ರಿಕಾಗೋಷ್ಠಿಯ ಮೂಲಕ ಹಾಡುಗಳ ಗೆಲುವಿನ ಸಿಹಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಸಂಗೀತ ನಿರ್ದೇಶಕರು, ಗಾಯಕ, ಗಾಯಕಿಯರು ಹಾಗೂ ಸಾಹಿತ್ಯ ಬರೆದವರ ಮೂಲಕವೇ ಈ ಗೆಲುವನ್ನು ಚಿತ್ರತಂಡ ಸಂಭ್ರಮಿಸಿದೆ. ಈ ಪ್ರತಿಕಾಗೋಷ್ಠಿಯಲ್ಲಿ ನಿರ್ಮಾಪಕರಾದ ಎನ್.ಆರ್ ಮಂಜುನಾಥ್ (ನೀಲೇರಿ), ನಿರ್ದೇಶಕ ಕೃತ್ವಿಕ್, ಹಿರಿಯ ಗೀತಸಾಹಿತಿ ಕೆ.ಕಲ್ಯಾಣ್, […]
ಚಿತ್ರದುರ್ಗದಲ್ಲಿ ತೀವ್ರ ಎದೆ ಉರಿಯಿಂದ ನರಳಿದ 4 ವರ್ಷದ ಮಗು ಸಾವು; ಹೃದಯಾಘಾತದ ಶಂಕೆ!

ಚಿತ್ರದುರ್ಗ: ಆಟ ಆಡುತ್ತಾ ಖುಷಿಯಾಗಿದ್ದ ನಾಲ್ಕು ವರ್ಷದ ಪುಟ್ಟ ಮಗುವೊಂದು ಹಠಾತ್ ಎದೆನೋವಿಗೆ ತುತ್ತಾಗಿ, ಚಿಕಿತ್ಸೆ ಸಿಗುವ ಮೊದಲೇ ಇಹಲೋಕ ತ್ಯಜಿಸಿರುವ ಹೃದಯವಿದ್ರಾವಕ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಜರುಗಿದೆ. ಹಿರಿಯೂರಿನ ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಅವರ ಮುದ್ದಿನ ಮಗ ವೈಷ್ಣವ್ (4) ಮೃತಪಟ್ಟ ದುರ್ದೈವಿ. ಹೆತ್ತವರ ಕಣ್ಣೆದುರೇ ಆಟವಾಡಿಕೊಂಡಿದ್ದ ಕಂದಮ್ಮ ದಿಢೀರನೆ ಮರೆಯಾಗಿರುವುದು ಹೆತ್ತ ಕರುಳನ್ನು ನಡುಗಿಸಿದೆ. ನಿಲುಕದ ಚಿಕಿತ್ಸೆ, ಮಾರ್ಗಮಧ್ಯದಲ್ಲೇ ನಿಂತುಹೋದ ಉಸಿರು! ಮನೆಯಲ್ಲಿದ್ದಾಗ ಬಾಲಕ ವೈಷ್ಣವ್ ತನಗೆ ಅತಿಯಾಗಿ ಎದೆ […]